ಬದುಕೆಂದರೆ ಇಲ್ಲಿ…

ಅನಿಧಿಕೃತ ಸಮರದಲಿ
ಜೀವ ವಿಶೇಷಗಳ ತಾಣ
ಕ್ಷಣದಲ್ಲಾಯ್ತು ಮಸಣ

ಕುಡಿಯೊಡೆದು ಚಿಗುರಿದ
ನಂದನವನವೆಲ್ಲಾ
ನಿಮಿಷದಲಿ
ಮರುಭೂಮಿಯಾಯ್ತಲ್ಲಾ!

ಗಡಿಮೀರಿ
ಒಳನುಗ್ಗಿದ್ದು ಅವರ ತಪ್ಪೊ?
ಬಿಟ್ಟಿದ್ದು ಇವರ ತಪ್ಪೊ?
ಬೇಕಿಲ್ಲ ತಪ್ಪುಸರಿಗಳ ಅಳತೆ
ರಾಜಕೀಯ ಕುತಂತ್ರದಲಿ
ತಕ್ಕಡಿ ಸರಿದೂಗೀತೇ?

ಕಪಟದೂತ್ಯವ ಆಡುವವರಾರೋ?
ದಾಳ ಒಗೆದವರಾರೋ?
ಗೆದ್ದವರಾರೋ? ಸೋತವರಾರೋ?
ಮುನ್ನುಗ್ಗಿದವರಾರೋ? ಹಿಮ್ಮೆಟ್ಟಿದವರಾರೋ?

ಏನಿಲ್ಲಾ, ಎಂತಿಲ್ಲ
ಸುಮ್ಮಸುಮ್ಮನೆ ಮಣ್ಣೊಳಗೆ
ರಕ್ತದ ನದಿಯಾದವರ
ಲೆಕ್ಕವಿಟ್ಟವರಾರು?
ಅವರಿವರ ತಪ್ಪಿಗೆ.
ತಪ್ಪಿಲ್ಲದೆಯೂ
ಬಲಿಪಶುವಾದರು ಹಲರು.

ನಮ್ಮವನದೋ, ಪರಕೀಯನದೋ
ಜೀವ ಜೀವವೇ ತಾನೇ?
ದೇಶಕ್ಕೆ ಗಡಿಯಷ್ಟೆ
ಸೃಷ್ಟಿಗೆ ಗಡಿಗಳಿವೆಯೆ?
ನಾಳೆಗೇ ಬೆಂಕಿಯೆಲ್ಲವೂ ಆರಿ
ಬೂದಿಯುಳಿದೀತು ಬರಿ.

ಆದರೆ… ಆದರೆ ಹೇಗಳಿಸುವುದು?
ಹೇಗಳಿಸುವುದು ಬಿಸಿ ನೆತ್ತರಿನ ಗುರುತುಗಳನ್ನು?
ಹೇಗೆ ಒರೆಸುವುದು ಸಂಬಂಧಿಗಳ
ಕಣ್ಣೀರಿನ ಶರಧಿಗಳನು?
ಬೇಕೆಂದರೂ ಈಗ
ತರಲಾದೀತೆ ಮತ್ತೆ ಜೀವಗಳನ್ನು?

ಬದುಕೆಂದರೆ ಇಲ್ಲಿ ಹೇ ತಂದೆ
ಮಾರಕಾಸ್ತ್ರಗಳಾಟವೇ?
ರುಂಡ ಚೆಂಡಾಡುವ ಹೂಟವೇ?
ರಾಶಿಹೆಣಗಳ ಕೂಟವೇ?
ಕಣ್ಣಾಮುಚ್ಚೆ ಮಕ್ಕಾಳಾಟವೇ?

ಬದುಕಿಸುವ ಮಂತ್ರ ಅರಿಯದ
ಹುಲುಮನುಜ
ಬದುಕು ಅಳಿಸುವ ತಂತ್ರ ಅರಿತದ್ದು
ಸರಿಯೇ ಪ್ರಭುವೇ?
ಇಲ್ಲಿ ಜೀವಕ್ಕೆ
ಬೆಲೆ ಇದೆಯೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ಎಸ್ ಎಂದರೂ
Next post ಬೊಗಸೆಯೊಳಗಿನ ಬಿಂದು

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys